ಸಂಘರ್ಷ

ಎಷ್ಟೊಂದು ಸಲ ಕೈಕೊಟ್ಟುಬಿಡುತ್ತವಲ್ಲ
ಹಿಗ್ಗು ಸಂತೋಷ ಆನಂದ
ಎಲ್ಲೋ ಲೆಕ್ಕ ತಪ್ಪಿ
ಮತ್ತೆಲ್ಲೋ ಮೋಸವಾಗಿ ಬಿಡುತ್ತದೆ
ಮಗದೊಮ್ಮೆ ಚದುರಂಗದಾಟ.

ಸುಖ ಸುಪ್ಪತ್ತಿಗೆಯ ಕಣ್ಣೀರು ಮಡುವಿಗೆ
ಸಿಕ್ಕಿತೊಂದು ಅನಾಥ ಶಿಶು ಮುತ್ತು
ಬೆಳಗಿನ ಹೊತ್ತು ಕಸದ ಗುಂಡಿಯೊಳಗಿಂದ
ಕತ್ತಲು ಸೀಳಿ ಬೆಳಕು ಹರಿದಿತ್ತು
ಮನ ಮನದ ಅಂಗಳಕೆ
ರಂಗೋಲಿ ಹಾಕಿತು.

ತಾಯ್ತನದ ತೊರೆ ತುಂಬಿ ಹರಿಯಿತು
ತೇಲಾಡಿತು, ಕುಣಿದು
ಕುಪ್ಪಳಿಸಿ ಹಗುರಾದಳವಳು.

ಕೋರ್ಟಾಜ್ಞೆ ಹೆತ್ತಮ್ಮನಿಗೆ ಮಗು
ತತ್ತರಿಸಿತು ಮತ್ತೆ ಎದೆ.
ಬದುಕು ಪ್ರೀತಿಸಿ ಸ್ವಾಗತಿಸಿದಳು ಮನೆಗೆ,
ಮಗು ಅದರಮ್ಮ ಶೋಷಿತೆಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವ್ಯ ಕನ್ನಿಕೆ
Next post ಹಂತಗಳು

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys